ಬದಲಾವಣೆ :
ಕಾಲಕ್ಕೆ ಗಾಳ ಹಾಕಿ ತಡೆಯಲಾದೀತೇ ,
ಹೃದಯಕ್ಕೆ ಭಾವಗಳ ಕಟ್ಟಿ ಎಳೆಯಲಾದೀತೇ..
ಇಂದು ಇವರು , ನಾಳೆ ಅವರು ಎಂದು ಹೇಳುವ ಮನಸ್ಸನ್ನು ಜರೆಯಲಾದೀತೇ ??
ಮನಸ್ಸೆಂಬ ರಾಜನ ಸೇವಕರು ನಾವು ,
ಅದು ಹೇಳಿದಂತೆ ಕುಣಿಯುವ ಮೂರ್ಖರು ನಾವು ..
ಬೀಳೆಂದರೆ ಬೀಳುವ , ಏಳೆಂದರೆ ಏಳುವ ಮಂಗಗಳು ನಾವು.
ಅಲೆಗಳು ಯಾವ ದಡಕ್ಕೂ ಸ್ವಂತವಲ್ಲ ,
ಕನಸುಗಳು ಎರಡು ಕಣ್ಣಿನದಲ್ಲ..
ಇಂದು ನಿನ್ನದಾಗಿದ್ದು ನಾಳೆ ನಿನ್ನದಲ್ಲ ..
Monday, August 22, 2011
Subscribe to:
Posts (Atom)