Monday, August 22, 2011

ಬದಲಾವಣೆ :

ಕಾಲಕ್ಕೆ ಗಾಳ ಹಾಕಿ ತಡೆಯಲಾದೀತೇ ,
ಹೃದಯಕ್ಕೆ ಭಾವಗಳ ಕಟ್ಟಿ ಎಳೆಯಲಾದೀತೇ..
ಇಂದು ಇವರು , ನಾಳೆ ಅವರು ಎಂದು ಹೇಳುವ ಮನಸ್ಸನ್ನು ಜರೆಯಲಾದೀತೇ ??

ಮನಸ್ಸೆಂಬ ರಾಜನ ಸೇವಕರು ನಾವು ,
ಅದು ಹೇಳಿದಂತೆ ಕುಣಿಯುವ ಮೂರ್ಖರು ನಾವು ..
ಬೀಳೆಂದರೆ ಬೀಳುವ , ಏಳೆಂದರೆ ಏಳುವ ಮಂಗಗಳು ನಾವು.

ಅಲೆಗಳು ಯಾವ ದಡಕ್ಕೂ ಸ್ವಂತವಲ್ಲ ,
ಕನಸುಗಳು ಎರಡು ಕಣ್ಣಿನದಲ್ಲ..
ಇಂದು ನಿನ್ನದಾಗಿದ್ದು ನಾಳೆ ನಿನ್ನದಲ್ಲ ..

1 comment: